ಪ್ರತಿ ಯಶಸ್ವಿ ಮನುಷ್ಯನ ಹಿಂದೆ ಒಂದು ನೋವಿನ ಕಥೆಯಿರುತ್ತೆ. ಸಂಕಷ್ಟಗಳನ್ನೆಲ್ಲಾ ಮೀರಿ ಬೆಳೆದರೆ ಮಾತ್ರ ಸಾಧನೆ ಸಾಧ್ಯ. ಇಂತಹ ಸಂಕಷ್ಟಗಳನ್ನೆಲ್ಲಾ ಮೀರಿದರೆ ಮಾತ್ರ ಸಾಧಕನ್ನಾಗಲು ಸಾಧ್ಯ. ಸ್ನೂಕರ್ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಕೂಡ ಇದಕ್ಕೆ ಹೊರತಾಗಿಲ್ಲ. ಪಂಕಜ್ ಇಂದು ಈ ಮಟ್ಟಕ್ಕೆ ಬೆಳೆಯಬೇಕಾದ್ರೆ ಒಂದು ನೋವಿನ ಕಥೆಯಿದೆ...
ಪಂಕಜ್ ಅಡ್ವಾಣಿ ಚಿಕ್ಕವಯಸ್ಸಿನಲ್ಲೆ ತಮ್ಮ ತಂದೆಯನ್ನು ಕಳೆದುಕೊಂಡ್ರು. ಅಣ್ಣನ ಜೊತೆ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಬಂದು ಆಗಾಗ ಅಭ್ಯಾಸ ಮಾಡುತ್ತಿದ್ರು. ಆಗ 10 ವರ್ಷದ ಈ ಪೋರ, ಆಗಿನ ಬಿಲಿಯರ್ಡ್ಸ್ ಸಂಸ್ಥೆ ಅಧ್ಯಕ್ಷ ಅರವಿಂದ್ ಸಾವುರ್ ಕಣ್ಣಿಗೆ ಬಿದ್ದ. ಆದಾಗ್ಲೇ ಹುಡುಗನ ಆಟ ನೋಡಿ ಅವರನ್ನು ಸ್ನೂಕರ್ ಆಡುವಂತೆ ಆ ಹುಡುಗಣ ಅಣ್ಣನ್ನು ಕೇಳಿಕೊಂಡ್ರು. ತಾಯಿಯ ಅನುಮತಿ ಕೇಳುವಂತೆ ಪಂಕಜ್ ಮತ್ತು ಶ್ರೀ ಅಡ್ವಾಣಿ ತಿಳಿಸಿದ್ರು.. ಅಷ್ಟೇ ಪಂಕಜ್ ಬದುಕಿಗೆ ಹೊಸ ತಿರುವು ಸಿಕ್ಕಿಬಿಡ್ತು...
ಪಂಕಜ್ ತಾಯಿಯ ಪರವಾನಿಗೆ ಕೇಳಲು ಸ್ವತಃ ಅರವಿಂದ್ ಸಾವುರ್ ಅವರ ಮನೆಗೆ ಹೋದ್ರು. ಪಂಕಜ್ ತಾಯಿ ಮೊದಲಿಗೆ ಅವರ ಮಾತಿಗೆ ಸಹಕರಿಸಲಿಲ್ಲ. ಅವನ್ನೊಬ್ಬ ಮಹಾನ್ ಪ್ರತಿಭೆ. ಅವನನ್ನು ಮಹಾನ್ ಆಟಗಾರನ್ನಾಗಿ ಮಾಡುವ ಜವಾಬ್ದಾರಿ ನನ್ನದು ನೀವು ಯಾವುದೇ ಹಣ ಕೊಡುವುದು ಬೇಡ. ನಾನೇ ಅವನನ್ನು ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತೇನೆ ಎನ್ನುವ ಮೂಲಕ ಪಂಕಜ್ ಅಮ್ಮನ್ನನ್ನು ಒಪ್ಪಿಸಿದ್ರು...
12ನೇ ವರ್ಷದಲ್ಲೇ ಪಂಕಜ್ ಕಿರಿಯರ ವಿಭಾಗದಲ್ಲಿ ಮಿಂಚಿದ್ರು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. 17ನೇ ವರ್ಷದಲ್ಲಿ ವಿಶ್ವಚಾಂಪಿಯನ್ನಾದ್ರು. 9 ವಿಶ್ವ ಟೈಟಲ್ ತಮ್ಮದಾಗಿಸಿಕೊಂಡಿರುವ ಅವರು ಸದ್ಯ ವಿಶ್ವದ ಸ್ಟಾರ್ ಕ್ಯೂ ಆಟಗಾರ. 25 ವರ್ಷದವರೆಗೂ ಒಂದು ಪಾರ್ಟಿಯಲ್ಲೂ ಅವರು ಭಾಗವಹಿಸಿಲ್ಲ. ಕೆಟ್ಟ ಅಭ್ಯಾಸಗಳಂತೂ ಅವರಿಗೆ ಗೊತ್ತೆಯಿಲ್ಲ. ಅವರ ಆಟ, ಗುರು, ಮನೆ ಬಿಟ್ರೇ ಏನು ಗೊತ್ತಿಲ್ಲ. ಇಂದಿಗೂ ಅರವಿಂದ್ ಸಾವುರ್ ಅವರ ನೆಚ್ಚಿನ ಶಿಷ್ಯ ಪಂಕಜ್ ಅಡ್ವಾಣಿ...
ಪಂಕಜ್ಗೆ ಅರವಿಂದ್ ಸಾವುರ್ ಕೇವಲ ಗುರು ಮಾತ್ರವಲ್ಲ. ಅವರ ತಂದೆಯಂತೆ ಬೆಳೆಸಿದ್ದಾರೆ. ಇಂದಿಗೂ ಪಂಕಜ್ ಹೆದರುವುದು ಮತ್ತು ಬೈಯಿಸಿಕೊಳ್ಳುವುದು ಅವರ ಕೋಚ್ ಹತ್ತಿರ. ಇಂದಿಗೂ ಪಂಕಜ್ ಸೋತಾಗೊಮ್ಮೆ ತಿದ್ದಿ ಬುದ್ದಿ ಹೇಳುವವರು ಅರವಿಂದದ ಸಾವುರ್. ತಮ್ಮ ಮಗಳಂತೆ, ಪಂಕಜ್ರನ್ನು ಅವರು ಬೆಳೆಸಿದ್ದಾರೆ. ಪಂಕಜ್ ಇವತ್ತಿಗೂ ತಮ್ಮ ಕುಟುಂಬದಂತೆ ಸಾವುರ್ ಅವರ ಕುಟುಂಬದ ಜೊತೆ ಬೆರೆತ್ತಿದ್ದಾರೆ.
ಅಡ್ವಾಣಿಗೆ ಮೆಂಟರ್, ಕೋಚ್ ಎಲ್ಲವೂ ಅರವಿಂದ್ ಸಾವುರ್. ಪಂಕಜ್ ವಿಶ್ವದ ಅನೇಕ ಶ್ರೇಷ್ಠ ಕೋಚ್ಗಳನ್ನು ನೋಡಿದ್ದಾರೆ. ಆದರೆ ಅವಱರು ಸಾವುರ್ಗೆ ಸಮವಲ್ಲ ಎನ್ನುತ್ತಾರೆ. ಪ್ರತಿ ಹುಡುಗರನ್ನು ತಮ್ಮ ಮಕ್ಕಳಂತೆ ಕಾಳಜಿ ಮಾಡುವ ಅದ್ಭುತ ಕೋಚ್ ಅವರು. ಗುರಿ ತೋರಿದ ಗುರು. ಒಂದ್ವೇಳೆ ಅರವಿಂದ್ ಸಾವುರ್ ಇಲ್ಲದಿದ್ರೇ ಪಂಕಜ್ ಅಡ್ವಾಣಿಯೆಂಬ ಈ ಮಹಾನ್ ಪ್ರತಿಭೆ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಲೋಕದ ಅನಭಿಷಕ್ತ ದೊರೆಯಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ...
ಅರವಿಂದ್ ಸಾವುರ್ ಹೇಳುವ ಪ್ರಕಾರ ನನ್ನ ಶ್ರಮಕ್ಕಿಂತ ಪಂಕಜ್ ನಿಷ್ಠೆ, ಶ್ರದ್ಧೆ ಅವರೊಬ್ಬ ಮಹಾನ್ ಆಟಗಾರನ್ನಾಗಿ ಮಿಂಚಲು ಕಾರಣವಾಯ್ತು. ಪಂಕಜ್ನಂತಹ ಅದ್ಭುತ ಶಿಷ್ಯ ಸಿಕ್ಕರೆ ಏನು ಬೇಕಾದ್ರು ಮಾಡಬಹುದು, ಅಂತಹ ಶಿಷ್ಯ ಎಲ್ಲರಿಗೂ ಸಿಗುವುದಿಲ್ಲ ಎಂತಾರೆ ಸಾವುರ್. ಈ ಗುರು -ಶಿಷ್ಯರ ಶ್ರಮ-ಪ್ರೇಮ ಇಂದು ವಿಶ್ವವೇ ಮೆಚ್ಚುವಂತಾಗಿದೆ. ಏನೇ ಆಗಲಿ ಶಿಲೆಯನ್ನು ಮೂರ್ತಿಯಾಗಿ ಕೆತ್ತಿದ ಕಲೆಗಾರ ಅರವಿಂದ್ ಸಾವುರ್ ಅವರ ಶ್ರಮಕ್ಕೆ ಒಂದು ಹ್ಯಾಟ್ಸ್ ಅಫ್ ಹೇಳಲೆಬೇಕು...
ರವಿ.ಎಸ್
ಪಂಕಜ್ ಅಡ್ವಾಣಿ ಚಿಕ್ಕವಯಸ್ಸಿನಲ್ಲೆ ತಮ್ಮ ತಂದೆಯನ್ನು ಕಳೆದುಕೊಂಡ್ರು. ಅಣ್ಣನ ಜೊತೆ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಬಂದು ಆಗಾಗ ಅಭ್ಯಾಸ ಮಾಡುತ್ತಿದ್ರು. ಆಗ 10 ವರ್ಷದ ಈ ಪೋರ, ಆಗಿನ ಬಿಲಿಯರ್ಡ್ಸ್ ಸಂಸ್ಥೆ ಅಧ್ಯಕ್ಷ ಅರವಿಂದ್ ಸಾವುರ್ ಕಣ್ಣಿಗೆ ಬಿದ್ದ. ಆದಾಗ್ಲೇ ಹುಡುಗನ ಆಟ ನೋಡಿ ಅವರನ್ನು ಸ್ನೂಕರ್ ಆಡುವಂತೆ ಆ ಹುಡುಗಣ ಅಣ್ಣನ್ನು ಕೇಳಿಕೊಂಡ್ರು. ತಾಯಿಯ ಅನುಮತಿ ಕೇಳುವಂತೆ ಪಂಕಜ್ ಮತ್ತು ಶ್ರೀ ಅಡ್ವಾಣಿ ತಿಳಿಸಿದ್ರು.. ಅಷ್ಟೇ ಪಂಕಜ್ ಬದುಕಿಗೆ ಹೊಸ ತಿರುವು ಸಿಕ್ಕಿಬಿಡ್ತು...
ಪಂಕಜ್ ತಾಯಿಯ ಪರವಾನಿಗೆ ಕೇಳಲು ಸ್ವತಃ ಅರವಿಂದ್ ಸಾವುರ್ ಅವರ ಮನೆಗೆ ಹೋದ್ರು. ಪಂಕಜ್ ತಾಯಿ ಮೊದಲಿಗೆ ಅವರ ಮಾತಿಗೆ ಸಹಕರಿಸಲಿಲ್ಲ. ಅವನ್ನೊಬ್ಬ ಮಹಾನ್ ಪ್ರತಿಭೆ. ಅವನನ್ನು ಮಹಾನ್ ಆಟಗಾರನ್ನಾಗಿ ಮಾಡುವ ಜವಾಬ್ದಾರಿ ನನ್ನದು ನೀವು ಯಾವುದೇ ಹಣ ಕೊಡುವುದು ಬೇಡ. ನಾನೇ ಅವನನ್ನು ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತೇನೆ ಎನ್ನುವ ಮೂಲಕ ಪಂಕಜ್ ಅಮ್ಮನ್ನನ್ನು ಒಪ್ಪಿಸಿದ್ರು...
12ನೇ ವರ್ಷದಲ್ಲೇ ಪಂಕಜ್ ಕಿರಿಯರ ವಿಭಾಗದಲ್ಲಿ ಮಿಂಚಿದ್ರು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. 17ನೇ ವರ್ಷದಲ್ಲಿ ವಿಶ್ವಚಾಂಪಿಯನ್ನಾದ್ರು. 9 ವಿಶ್ವ ಟೈಟಲ್ ತಮ್ಮದಾಗಿಸಿಕೊಂಡಿರುವ ಅವರು ಸದ್ಯ ವಿಶ್ವದ ಸ್ಟಾರ್ ಕ್ಯೂ ಆಟಗಾರ. 25 ವರ್ಷದವರೆಗೂ ಒಂದು ಪಾರ್ಟಿಯಲ್ಲೂ ಅವರು ಭಾಗವಹಿಸಿಲ್ಲ. ಕೆಟ್ಟ ಅಭ್ಯಾಸಗಳಂತೂ ಅವರಿಗೆ ಗೊತ್ತೆಯಿಲ್ಲ. ಅವರ ಆಟ, ಗುರು, ಮನೆ ಬಿಟ್ರೇ ಏನು ಗೊತ್ತಿಲ್ಲ. ಇಂದಿಗೂ ಅರವಿಂದ್ ಸಾವುರ್ ಅವರ ನೆಚ್ಚಿನ ಶಿಷ್ಯ ಪಂಕಜ್ ಅಡ್ವಾಣಿ...
ಪಂಕಜ್ಗೆ ಅರವಿಂದ್ ಸಾವುರ್ ಕೇವಲ ಗುರು ಮಾತ್ರವಲ್ಲ. ಅವರ ತಂದೆಯಂತೆ ಬೆಳೆಸಿದ್ದಾರೆ. ಇಂದಿಗೂ ಪಂಕಜ್ ಹೆದರುವುದು ಮತ್ತು ಬೈಯಿಸಿಕೊಳ್ಳುವುದು ಅವರ ಕೋಚ್ ಹತ್ತಿರ. ಇಂದಿಗೂ ಪಂಕಜ್ ಸೋತಾಗೊಮ್ಮೆ ತಿದ್ದಿ ಬುದ್ದಿ ಹೇಳುವವರು ಅರವಿಂದದ ಸಾವುರ್. ತಮ್ಮ ಮಗಳಂತೆ, ಪಂಕಜ್ರನ್ನು ಅವರು ಬೆಳೆಸಿದ್ದಾರೆ. ಪಂಕಜ್ ಇವತ್ತಿಗೂ ತಮ್ಮ ಕುಟುಂಬದಂತೆ ಸಾವುರ್ ಅವರ ಕುಟುಂಬದ ಜೊತೆ ಬೆರೆತ್ತಿದ್ದಾರೆ.
ಅಡ್ವಾಣಿಗೆ ಮೆಂಟರ್, ಕೋಚ್ ಎಲ್ಲವೂ ಅರವಿಂದ್ ಸಾವುರ್. ಪಂಕಜ್ ವಿಶ್ವದ ಅನೇಕ ಶ್ರೇಷ್ಠ ಕೋಚ್ಗಳನ್ನು ನೋಡಿದ್ದಾರೆ. ಆದರೆ ಅವಱರು ಸಾವುರ್ಗೆ ಸಮವಲ್ಲ ಎನ್ನುತ್ತಾರೆ. ಪ್ರತಿ ಹುಡುಗರನ್ನು ತಮ್ಮ ಮಕ್ಕಳಂತೆ ಕಾಳಜಿ ಮಾಡುವ ಅದ್ಭುತ ಕೋಚ್ ಅವರು. ಗುರಿ ತೋರಿದ ಗುರು. ಒಂದ್ವೇಳೆ ಅರವಿಂದ್ ಸಾವುರ್ ಇಲ್ಲದಿದ್ರೇ ಪಂಕಜ್ ಅಡ್ವಾಣಿಯೆಂಬ ಈ ಮಹಾನ್ ಪ್ರತಿಭೆ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಲೋಕದ ಅನಭಿಷಕ್ತ ದೊರೆಯಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ...
ಅರವಿಂದ್ ಸಾವುರ್ ಹೇಳುವ ಪ್ರಕಾರ ನನ್ನ ಶ್ರಮಕ್ಕಿಂತ ಪಂಕಜ್ ನಿಷ್ಠೆ, ಶ್ರದ್ಧೆ ಅವರೊಬ್ಬ ಮಹಾನ್ ಆಟಗಾರನ್ನಾಗಿ ಮಿಂಚಲು ಕಾರಣವಾಯ್ತು. ಪಂಕಜ್ನಂತಹ ಅದ್ಭುತ ಶಿಷ್ಯ ಸಿಕ್ಕರೆ ಏನು ಬೇಕಾದ್ರು ಮಾಡಬಹುದು, ಅಂತಹ ಶಿಷ್ಯ ಎಲ್ಲರಿಗೂ ಸಿಗುವುದಿಲ್ಲ ಎಂತಾರೆ ಸಾವುರ್. ಈ ಗುರು -ಶಿಷ್ಯರ ಶ್ರಮ-ಪ್ರೇಮ ಇಂದು ವಿಶ್ವವೇ ಮೆಚ್ಚುವಂತಾಗಿದೆ. ಏನೇ ಆಗಲಿ ಶಿಲೆಯನ್ನು ಮೂರ್ತಿಯಾಗಿ ಕೆತ್ತಿದ ಕಲೆಗಾರ ಅರವಿಂದ್ ಸಾವುರ್ ಅವರ ಶ್ರಮಕ್ಕೆ ಒಂದು ಹ್ಯಾಟ್ಸ್ ಅಫ್ ಹೇಳಲೆಬೇಕು...
ರವಿ.ಎಸ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ